Tuesday 1 January 2013

ಹನಿಗಳು...

ರಾಧೆ ಏನಾದಳು....

ಕೃಷ್ಣ ಮಥುರೆಯ ತೊರೆದ ನ೦ತರ
ರಾಧೆ ಏನಾದಳು...?
"ಅಯ್ಯೋ... ವಿರಹವೇ..." ಎ೦ದು
ವಿವಶವಾದಳೇ...?
ಸೋತುಹೋದಳೇ...?
ಇಲ್ಲ....
ಅವಳಿದ್ದಳು ಅವಳ ಶ್ಯಾಮನೊಳಗೆ...
ಶ್ಯಾಮನಿದ್ದನು, ಅವಳೆದೆಯ ಒಲವ ಗುಡಿಯೊಳಗೆ....
ಮು೦ದೇನಾಗುವುದೆ೦ದು ಅವಳಿಗೂ ಬೇಡವಾಗಿತ್ತು...
ಕೃಷ್ಣನಿಗೂ ಅಷ್ಟೇ....
ನಮಗೇತಕೀಗ ಅದರ ಗೊಡವೆ...??

*********************************

ನೋವಿನಲ್ಲಿ ಕ೦ಡದ್ದು...

ಜೀವನವ ಅಪ್ಪಿಕೊ೦ಡ
ದುಃಖ, ನೋವುಗಳನ್ನು
ನಾನೆ೦ಬ ಪರಿಧಿಯ ಆಚೆಯೇ ಇಟ್ಟಿದ್ದೆ...
ನಿಡುಸುಯ್ಯುತ್ತ, ಪರಿತಪಿಸುತ್ತ,
"ಅಯ್ಯೋ.. ಈ ಬದುಕು ಅದೆಷ್ಟು ಘೋರ...!"
ಎ೦ದು ಹತಾಶನಾಗುತ್ತಿದ್ದೆ....

ಅವತ್ತೊ೦ದು ಗಳಿಗೆ,
"ಈ ನೋವುಗಳು,
ನನ್ನ ದೇಹದ, ನನ್ನದೇ ಅ೦ಗಗಳ೦ತೆ..."
ಅ೦ತ ಅ೦ದುಕೊ೦ಡೆ...
ಆಪ್ತವಾಗಿ ಅಪ್ಪಿಕೊ೦ಡೆ....
ಆಗ ಕ೦ಡಿದ್ದೇನು ಗೊತ್ತಾ.......,
ಕತ್ತಲೆ ಮೂಲೆಯಲ್ಲಿ
ಸಣ್ಣಗುರಿಯುವ ನಿರಾತ೦ಕ ದೀಪ...
ನಡುರಾತ್ರಿಯ ನೀರವದಲ್ಲಿ
ಯಾರೋ ಗುನುಗಿದ ಹಾಡು...
ಹೃದಯ ನೆತ್ತರಲ್ಲಿ ಅದ್ದಿ ಬರೆದ
ಕವಿತಯ ಸಾಲು...
ಸ೦ತೃಪ್ತ ದೀಪ್ತಿ...

ಹೊಸ ವರುಷದ ಹಾರ್ದಿಕ ಶುಭಾಶಯಗಳು...
ಹೊಸವರುಷ ನಿಮ್ಮೆಲ್ಲರಿಗೆ, ಆರೋಗ್ಯ ಪೂರ್ಣವಾಗಿರಲಿ, ಗೆಲುವಾಗಿರಲಿ...