Sunday 22 July 2012

ಅಭ್ಯಾಸ-೨೫ - ಬೆಳ್ಳಿಹಬ್ಬ: ಬಿಡುಗಡೆಯಾದ "ಒಳದನಿಯ ಮರ್ಮರ".

ಇ೦ದು, ನಮ್ಮ ಅಭ್ಯಾಸದ ಬೆಳ್ಳಿಹಬ್ಬವನ್ನು ಆಚರಿಸಿದೆವು. ಇದರ ಪ್ರಯುಕ್ತ ಅಭ್ಯಾಸಿಗರ ಬರವಣಿಗೆಯ ಸ್ಮರಣ ಸ೦ಚಿಕೆ "ಒಳದನಿಯ ಮರ್ಮರ" ಬಿಡುಗಡೆಯಾಯಿತು.

ಈ ಪುಸ್ತಕ ಬಿಡುಗಡೆಯನ್ನು ಡಾ. ಗಿರಡ್ಡಿ ಗೋವಿ೦ದರಾಜ ಅವರು ಮಾಡಿದರು. ಈ ಶುಭ ಗಳಿಗೆಯಲ್ಲಿ ಎಲ್ಲ ಅಭ್ಯಾಸಿಗರ ಜೊತೆಯಾದವರು ಅಭ್ಯಾಸದ ಕರ್ತಾರ ಡಾ. ಎಚ್ಚೆಸ್ವಿ, ಅತಿಥಿಗಳಾದ ಡಾ. ರಹಮತ್ ತರೀಕೆರೆ ಮತ್ತು ಡಾ. ಆಶಾದೇವಿಯವರು. ಅಭ್ಯಾಸದ ಮೂಲ ಪುರುಷರಲ್ಲೊಬ್ಬರಾದ ಡಾ. ರಾಜಶೇಖರ್ ಮಾಳೂರ ಅವರ ಮನೆಯಲ್ಲಿ ನಡೆದ ಈ ಸರಳ ಸಮಾರ೦ಭದ ಮತ್ತೊ೦ದು ಆಕರ್ಷಣೆಯೆ೦ದರೆ "ಹಳೆಯ ಸಾಹಿತ್ಯ ನಮಗೆ ಬೇಕೆ" ಎ೦ಬುದರ ಬಗ್ಗೆ ನಡೆದ ಗ೦ಭೀರ ಚರ್ಚೆ. ಆಶಾದೇವಿಯವರು ವಿಚಾರ ಮ೦ಡಿಸಿದರೆ, ರಹಮತ್ ತರೀಕೆರೆಯವರು ಅದಕ್ಕೆ ಪ್ರತಿಕ್ರಿಯೆ ನೀಡಿದರು. ಅನ೦ತರ ನಡೆದ ಚರ್ಚೆಯಲ್ಲಿ ಎಚ್ಚೆಸ್ವಿಯವರು, ಗಿರಡ್ಡಿಯವರು ಸಕ್ರಿಯವಾಗಿ ಭಾಗವಹಿಸಿ ಎಲ್ಲ ಅಭ್ಯಾಸಿಗರಿಗೆ ಮಾರ್ಗದರ್ಶನವನ್ನಿತ್ತರು. ಒಟ್ಟಿನಲ್ಲಿ ಒ೦ದು ಸಾರ್ಥಕ ದಿನ ಕಳೆದ ಭಾವ ನನ್ನಲ್ಲಿ ಮೂಡಿತ್ತು.

ಅಭ್ಯಾಸಿಗರ ತೋಚು ಗೀಚುಗಳ ಗುಚ್ಚ "ಒಳದನಿಯ ಮರ್ಮರ"ದ ಸಾಕಾರದ ಹಿ೦ದಿರುವ ಎಲ್ಲ ಹಿರಿಯ ಅಭ್ಯಾಸ ಮಿತ್ರರಿಗೆ ನನ್ನ ಅನ೦ತ ಧನ್ಯವಾದಗಳು.

ಈ ಸಮಾರ೦ಭದ ಕೆಲವು ಗಳಿಗೆಗಳು ಇಲ್ಲಿ ಸೆರೆಹಿಡಿದಿಟ್ಟಿದ್ದೇನೆ.

ನಮಸ್ಕಾರಗಳು.








No comments:

Post a Comment