ನಾನು
ಹುಟ್ಟಿದ್ದು
ನಿರ್ವಾತದಲ್ಲಿ..
ಅದಕ್ಕೆ ಹುಟ್ಟಿದ್ದು
ನಿರ್ವಾತದಲ್ಲಿ..
ನನಗ್ಯಾವ ಹೆಸರಿಲ್ಲ...
ನನ್ನನ್ನು ನೀವು,
ಅನಾಮಿಕಳೆ೦ದು
ಕೂಗಿದೆಡೆ
ಹೊರಳುವೆನಲ್ಲಿ...
ನಾನೊ೦ದು
ಕವಿತೆಯ ಹಾಗೆ,
ಅದರೆ ಕವಿತೆಯಲ್ಲ...
ನನ್ನ
ರೂಪಿಸಿದವನನ್ನ
ನಾನು ಕವಿಯೆನ್ನುವುದಿಲ್ಲ...
ನಿರ್ಭಾವುಕ
ನಿರ್ವಾತದಲ್ಲಿ
ನನ್ನನ್ನು,
ಹಾಳೆಗೆ ಕರೆ
ತ೦ದವಗೆ,
ನನಗೆ ಹೆಸರಿಡುವ
ಹಕ್ಕು,
ನಾನು ಕೊಡುವುದಿಲ್ಲ...
ಅನಾಮತ್ತು
ಚಿತ್ತು ಕಾಟುಗಳ
ನಡುವೆ,
ನನ್ನನ್ನ ಅಡ್ಡಾದಿಡ್ಡಿ
ರೇಕುಗಳಾಗಿ
ಇಟ್ಟವನು ಅವನು...
ಈಗ,
ನನಗೇನಾದರೂ
ಒ೦ದು ರೂಪ,
ಒ೦ದು ಭಾವ,
ಒ೦ದು ಅರ್ಥ
ಒದಗಿದೆಯೆ೦ದರೇ,
ಅದು ಕೇವಲ ನನ್ನದೇ
ಖಾಸಗಿ ಗಳಿಕೆ, earnಉ...
ನನ್ನ ಕ೦ಡು
ನೀವು
ಮರುಗಿದರೇ,
ಆ ಮರುಕಕ್ಕೆ,
ಅವನೇ ಸ೦ಪೂರ್ಣ
ಅರ್ಹ...!!
ತ್ರಿಶ೦ಕುವಿನ
ಸ್ಥಿತಿಗೆ ಕಾರಣ
ವಿಶ್ವಾಮಿತ್ರನ ಅಸಹಾಯಕತೆ
ಹೊರತು
ತ್ರಿಶ೦ಕುವಲ್ಲ....
ಇಷ್ಟೆಲ್ಲ ಆದನ೦ತರ,
ನಿಮ್ಮಲ್ಲೊ೦ದು ಎಳೆ
ಭಾವ
ಸ್ಫುರಣೆಯಾಗಿದೆಯೆ೦ದರೇ,
ನಾನು
ಇನ್ನೊಮ್ಮೆ
ಅನಾಮಿಕಳಾಗಿ
ಜನಿಸ ಬಯಸುತ್ತೇನೆ....
No comments:
Post a Comment