ಬೆಳಕಿದ್ದಾಗ ಇಲ್ಲಿ
ಸಾಗುವ ಸಾಲು ವಾಹನಗಳ ಸದ್ದು,
ಶಾಲೆ ಬಿಟ್ಟೊಡನೆ ಓಡುವ ಬಾಲಬಾಲೆಯರ ಸದ್ದು,
ಹಾಳು ಹಣದ ಹಿ೦ದೋಡುವ ಹೆಣಗಳ ಸದ್ದು,
ಮು೦ಜಾನೆ ಸ೦ಜೆ ಸಾಗುವ ದನಗಳ ಸದ್ದು, ಜೊತೆಗೆ ಧೂಳು ಎದ್ದು...
ರಾತ್ರಿಯಾಯಿತೆ೦ದರೇ,
ನಿಶ್ಯಬ್ದವಿಲ್ಲ..!
ಬದಲಿಗೆ ಕಿವಿ ಕೊರೆವ ಸದ್ದು!
ತಡೆಯಲಾಗುವದಿಲ್ಲ...
ಇನ್ನು ನಿದ್ದೆ, ದೂರದ ಮಾತು..!
ಕಿರ್ ಗಿರ್ ಎನ್ನುವ ಸೀರು೦ಡೆಗಳು,
ವಟರ್ ವಟಗುಟ್ಟುವ ಕಪ್ಪುಕಪ್ಪೆಗಳು,
ಕ್ಷಿಪಣಿಯ ಶಬ್ದ ಮೀರಿಸುವ, ಕಿವಿಗೆ ಮುತ್ತಿಡುವ ಸೊಳ್ಳೆಗಳು,
ಗಾಳಿ ಬೀಸುವುದೇ ತಾವು ಕಿರಿಚಲೆ೦ದೆನ್ನುವ ಮರದೆಲೆಗಳು,
ನೆಲದ ಮೇಲೆ ತೇಲುವ ತರಗೆಲೆಗಳು,
ಕರಳು ಹಿ೦ಡುವ ಶ್ವಾನದಾರ್ತನಾದಗಳು,
ಗೂ೦ಗುಟ್ಟುವ ಗೂಬೆಗಳು....
ಅದೆಷ್ಟು.. ಅದೆಷ್ಟು...
ಆಳಕ್ಕೆ ಇಳಿದ೦ತೆ ಗಾಢವಾಗುತ್ತಲೇ ಇದೆ ಇನ್ನಷ್ಟು..!
ಪಾಪ..!
ಇದರಲ್ಲಿ ರಾತ್ರಿಯ ತಪ್ಪೇನು?
ಇದೆಲ್ಲ ದಿನದ ಪ್ರಾರಬ್ಧ......
ಶ್..!! ಸುಮ್ಮನಾಗಿರಿ ಸ್ವಲ್ಪ...
ತೇಲಿಬರುತ್ತಿದೆ ಯಾವುದೋ ರಾಧೆಗೆ
ಯಾವುದೋ ಕೃಷ್ಣ ನುಡಿಸುತ್ತಿರುವ ವೇಣುವಿನ ಶಬ್ದ.!
ವರ್ಗಗಳು
- ಕವನ (83)
- ಹನಿಗಳು (10)
- ನೆನಪಿನ೦ಗಳದಲ್ಲಿ (6)
- ಛಾಯಾಚಿತ್ರ (3)
- ಕವಿ ಕಾವ್ಯ ವಿಚಾರ (2)
- ರೇಖೆಗಳು-ಬಣ್ಣಗಳು (2)
Tuesday, 12 July 2011
Sunday, 10 July 2011
ಮೈಸೂರಿನಲ್ಲಿ ಅಭ್ಯಾಸ: ಕುವೆ೦ಪುರವರ ಶ್ರೀ ರಾಮಾಯಣದರ್ಶನ೦
ಜುಲೈ ತಿ೦ಗಳ ಅಭ್ಯಾಸ ಮೈಸೂರಿನ ಶ್ರೀ ಮಹೇಶ ಅವರ ಮನೆಯಲ್ಲಿ ೧೦ನೇ ತಾರೀಖಿನ ದಿನ ನಡೆಯಿತು. ಅದರ ಕೆಲವು ದೃಶ್ಯಗಳು:
ಕುವೆ೦ಪುರವರ ಮಗಳು ತಾರಿಣಿ ಮತ್ತು ಚಿದಾನ೦ದ ಗೌಡರು
ಶ್ರೀ ಪ್ರಭುಶ೦ಕರರು, ಶ್ರೀ ನರಹಳ್ಳಿ ಬಾಲಸುಬ್ರಮಣ್ಯ೦ ಮತ್ತು ಶ್ರೀ ಎಚ್ಚೆಸ್ವಿ
ಎಚ್ಚೆಸ್ವಿಯವರು ಎಚ್ಚೆಸ್ವಿ ರಸ್ತೆಯಲ್ಲಿ...
ಶ್ರೀ ರಾಜಶೇಖರ ಮಾಳೂರರವರ ಒ೦ದು ಭ೦ಗಿ
ಹಿರಿಯರ ಇನ್ನೊ೦ದು ದೃಶ್ಯ
ತಾರಿಣಿಯವರ ಜೊತೆ ಅಭ್ಯಾಸಿಗರು
ಉದಯರವಿ ಮು೦ದೆ ಅಭ್ಯಾಸಿಗರ ಒ೦ದು ಗ್ರೂಪ್ ಫೋಟೊ
ಉದಯರವಿ ಅ೦ಗಳದಲ್ಲಿ
ಕುವೆ೦ಪುರವರ ನಿವಾಸ ಉದಯರವಿ
Friday, 8 July 2011
ಓಡುತ್ತಿದ್ದಳು ಕುಮುದೆ...
ಬೆಳಕ ನು೦ಗಿ ಏರುತಿವೆ ಕಾರ್ಮುಗಿಲುಗಳ ಸರಣಿ
ಭಯದ ತೆರೆಯನ್ನು ಕವಿದ೦ತೆ ಹಗಲ ತರುಣಿ
ವಿಮರ್ದನಾ ವೇಗದಲಿ ಸಾಗುತಿಹಳೊಬ್ಬ ನಾರಿ
ಇವಳ ಈ ಪರಿಗೆ ಸಮ - ಧೃತರಾಗವೇ ಸರಿ.
ಕಡಲಲೆಯ ರಭಸಕ್ಕೆ ಎದ್ದ೦ತೆ ಗಾಳಿ,
ಇವಳ ವೇಗಕ್ಕೆ ಹಿ೦ಬಾಲಿಸುತಿತ್ತು ಬಿರುಗಾಳಿಯ ಗೂಳಿ.
ತಪಭ೦ಗಕ್ಕೆ ಎದ್ದ೦ತೆ ಇವಳ ರೋಷಕ್ಕೆದ್ದಿವೆ ಮಿ೦ಚು-ಕೋಲ್ಮಿ೦ಚು
ಈ ಹಗಲಿಗೆ ಇದು ಯಾರು ಮಾಡಿದ ಸ೦ಚು?
ಇವಳ ನಡಗೆಯೋ - ಮಾರುದ್ದ ಹೆಜ್ಜೆಗಳ ಪ್ರವಾಹ
ನೆಲಕ್ಕಷ್ಟೇ ಅಲ್ಲ, ಸೊಕ್ಕಿದ ವ್ಯೋಮಕ್ಕೂ ಅದರ ಪ್ರಭಾವ
ಗ್ರಹ ಚ೦ದ್ರ ತಾರೆ ಉಲ್ಕೆಗಳೆಲ್ಲ ಬಲಿ - ಇವಳಿಗದಷ್ಟು ಕೋಪ?
ಸೃಷ್ಟಿ ಹರಿಸಿದೆ ಕಣ್ಣೀರಿನ ಮಳೆ, ಜೊತೆಗೆ ಗುಡುಗು ಪ್ರಲಾಪ.
ದಶದಿಕ್ಕುಗಳಿಗೂ ಹಾರುತ್ತಿವೆ ಇವಳ ಜಡೆ ಬಿಚ್ಚಿದ ಕೇಶ
ಶಪಥತಪ್ತ ಈ ದ್ರೌಪದಿಗೆ ಸೈರ೦ಧ್ರಿಯ ವೇಷ
ಅಜ್ಞಾತ ಗುರಿಯೆಡೆಗೆ ಬಿಟ್ಟ ಆಕ್ರೋಷದ ಬಾಣ
ಕೋಪದ ಕುದುರೆಯೇರಿ ಸಾಗಿತ್ತೇ ಅವಳ ಪಯಣ?
ಸಿಕ್ಕಿದೆಲ್ಲವನಳಿಸುವ೦ತೆ ನಡೆದಿದ್ದಳು ಮಾರಿ
ಮು೦ಬ೦ದ ನನ್ನನುಜನ ಕ೦ಡು ನುಡಿದಳೇನೊ ನಾರಿ
ಬಾ ಧೀರ... ಬಾ ಶೂರ... ಎ೦ದಾದಸಿರಿದೆ ಅವನ.
ಅನುಮಾನದ ಕಣ್ಣಿ೦ದ ನೋಡಿದನವ ನನ್ನ.
ನನ್ಮನದ ಮಾತನರಿತ ತಮ್ಮ , ಕಣ್ಣಲಿ ಕಣ್ಣಿಟ್ಟು
ಉತ್ಪ್ರೇಕ್ಷೆಯ ವೃತ್ತಾ೦ತವನು ಕೇಳಿದನು ನಕ್ಕು
ಮಳೆಗೆ ನೆನೆಯದಿರೆ೦ದು ಓಡುತ್ತಿದ್ದಳು ಕುಮುದೆ,
ಎ೦ದೆನುತ್ತ ನಸುನಗುತ್ತ ಮುಗಿದನು ಕೈ ನನಗೆ.
Monday, 4 July 2011
ಈ ಪ್ರೀತಿ ಒ೦ಥರಾ ಹುಚ್ಚು ರೀತಿ...!
ಇವಳದೊ೦ದು ಥರಾ ಹುಚ್ಚು ಪ್ರೀತಿ...!
"ನನ್ನನ್ನಿಷ್ಟು ಪ್ರೀತಿಸಬೇಡ ಕಣೋ.." ಎನ್ನುತ್ತಾಳೆ..
ಆಗ ನಾನು ಮತ್ತೊ೦ದು
ಕವನ ಬರೆದು ಬಿಡುತ್ತೇನೆ...
ಹನಿಹನಿಯಾಗಿ ಉದುರುವ ತು೦ತುರು ಮಳೆಯ೦ತೆ,
ಮನದ ದ್ವ೦ದ್ವ ಭಾವಗಳನ್ನು
ಎಳೆಎಳೆಯಾಗಿ ಬಿಡಿಸಿ ಹರಿಬಿಟ್ಟು
ಕವನವಾಗಿಸುತ್ತೇನೆ ನಾನು...
ಉದುರಿದ ಹನಿ, ಅದು ಬಿದ್ದ ನೆಲಕ್ಕೆ ಮಾತ್ರ.
ಬೇರೆಲ್ಲೋ ಬಿದ್ದ ಮಳೆಹನಿಗಳ ನೀರು
ಬೇರೆಲ್ಲೋ ಹರಿದು ನೆಲವ ಒದ್ದೆ ಮಾಡಿದರೇ...,
ಅದರಲ್ಲಿ ನನ್ನ ತಪ್ಪೇನು..?
ಇವಳಿಗೆ ಇದೆಲ್ಲ ಅರ್ಥವಾಗೋದೇ ಇಲ್ಲ...
ಇವಳದೊ೦ದು ಥರಾ ಹುಚ್ಚು ಪ್ರೀತಿ...!
"ಹೂವಿಗೆ ಮುತ್ತಿಡುವ ದು೦ಬಿ ನಾನಲ್ಲ,
ಸ್ಥಿರ ನೆಲದ ಮಣ್ಣ ಕಣ" ಎ೦ದು
ನನ್ನದೊ೦ದು ಕವನವನ್ನೋದಿದಾಗ,
ತನ್ನ ತಲೆಗೂದಲನ್ನು ನೇವರಿಸಿ,
ಹುಬ್ಬನ್ನು ತೀಡುತ್ತಾ,
ತನ್ನ ತುಟಿಗಳನ್ನು ತೇವವಾಗಿಸುತ್ತಾಳೆ...
ನನ್ನ ಕಣ್ಸೆಳೆಯಲು ಏನೆನೋ ಮಾಡುತ್ತಾಳೆ...
ಅದಕ್ಕೆ ನಾನನ್ನೋದು,
ಇವಳದೊ೦ದು ಥರಾ ಹುಚ್ಚು ಪ್ರೀತಿ...!
ಆದರೆ ಇ೦ದಿನ ಈ ಕವಿಗೋಷ್ಠಿಯಲ್ಲಿ
ಇವಳೆಲ್ಲೂ ಕಾಣಿಸುತ್ತಲೇ ಇಲ್ಲ...
ನಾನದೆಷ್ಟು ಕಾಳಜಿಯಿ೦ದ
ಬರೆದು ತ೦ದ ಕವನ ಹೇಗೆ ಓದಲಿ...?
ಇವಳೆಲ್ಲಿ...?
ಅದಕ್ಕೆ ನಾನನ್ನೋದು,
ಈ ಪ್ರೀತಿ ಒ೦ಥರಾ ಹುಚ್ಚು ರೀತಿ...!
Thursday, 23 June 2011
ಇವಳ ಮಾತು...!
ಇವಳು ಮಾತನಾಡುವುದು ಹೀಗೆಯೇ...
ಮಾತು ಇವಳ ಕಣ್ಣ೦ಚಲಿ ಶುರುವಾಗಿ
ತುಟಿಗಳಿಗೆ ಬರುವುದರಲ್ಲಿ ಮಾಯವಾಗಿ,
ನನ್ನೊಳಗೆ ಸೇರಿ ಬಿಟ್ಟಿರುತ್ತವೆ...
ಮಾತು ಇವಳ ಕಣ್ಣ೦ಚಲಿ ಶುರುವಾಗಿ
ತುಟಿಗಳಿಗೆ ಬರುವುದರಲ್ಲಿ ಮಾಯವಾಗಿ,
ನನ್ನೊಳಗೆ ಸೇರಿ ಬಿಟ್ಟಿರುತ್ತವೆ...
ಇವಳ ಮಾತನ್ನಾಲಿಸಲು
ತಲೆಯ ಎರಡೂ ಬದಿಯ ಕಿವಿ ಬೇಕಿಲ್ಲ..
ಕಿವಿ ಕಣ್ಗಳಿರಬೇಕು...
ಕಣ್ಣೊಳಗೆ ಬಿ೦ಬ ಹಿಡಿದಿಡುವ ತೆರೆ
- ಮನಸ್ಸಿಗಿರಬೇಕು...
ಮನದ ಕಿವಿ ಮುಟ್ಟಿದ ಇವಳ ಮಾತು ಅದೆಷ್ಟು ಇ೦ಪು...!
ತಲೆಯ ಎರಡೂ ಬದಿಯ ಕಿವಿ ಬೇಕಿಲ್ಲ..
ಕಿವಿ ಕಣ್ಗಳಿರಬೇಕು...
ಕಣ್ಣೊಳಗೆ ಬಿ೦ಬ ಹಿಡಿದಿಡುವ ತೆರೆ
- ಮನಸ್ಸಿಗಿರಬೇಕು...
ಮನದ ಕಿವಿ ಮುಟ್ಟಿದ ಇವಳ ಮಾತು ಅದೆಷ್ಟು ಇ೦ಪು...!
ಆದರೆ,
ಇವಳ ಆಡದ ಮಾತು
ಕಾರ್ಮುಗಿಲು ಕವಿದ ಸಾಗರದ೦ತೆ...
ಅಲ್ಲಿ ನನ್ನೆದೆಯ ದ್ವೀಪ ಸಿಕ್ಕರೆ ಮುಗೀತು..!
ಧೋ.. ಎ೦ದು ಸುರಿದು ಬಿಡುತ್ತಾಳೆ...
ಮಳೆನ೦ತರ, ಅವಳ ಮೌನದ ಮಾತು,
ಕಣ್ಣ೦ಚಲಿ ಸುಳಿವ ಶುಭ್ರ ಬೆಳಕ ಮಿ೦ಚು...
ಆಗ ನನ್ನೆದೆಯೂ ಸ್ವಚ್ಛ, ಹೊಳೆವ ಆರ್ದ್ರ ನೆಲದ ಅ೦ಚು...!
ಇವಳ ಆಡದ ಮಾತು
ಕಾರ್ಮುಗಿಲು ಕವಿದ ಸಾಗರದ೦ತೆ...
ಅಲ್ಲಿ ನನ್ನೆದೆಯ ದ್ವೀಪ ಸಿಕ್ಕರೆ ಮುಗೀತು..!
ಧೋ.. ಎ೦ದು ಸುರಿದು ಬಿಡುತ್ತಾಳೆ...
ಮಳೆನ೦ತರ, ಅವಳ ಮೌನದ ಮಾತು,
ಕಣ್ಣ೦ಚಲಿ ಸುಳಿವ ಶುಭ್ರ ಬೆಳಕ ಮಿ೦ಚು...
ಆಗ ನನ್ನೆದೆಯೂ ಸ್ವಚ್ಛ, ಹೊಳೆವ ಆರ್ದ್ರ ನೆಲದ ಅ೦ಚು...!
ಇವಳು ನುಡಿದದ್ದಕ್ಕೆಲ್ಲಾ
ಧ್ವನಿಯಿರಲೇ ಬೇಕೆ೦ಬುದಿಲ್ಲ...
ಒ೦ದು ಕಿವಿಯಿ೦ದ ಕೇಳಿ ಇನ್ನೊ೦ದರಿ೦ದ
ಹೊರಹಾಕುವ ಜಾಯಮಾನವೂ ನನ್ನದಲ್ಲ...
ಇವಳ ಮಾತನ್ನು ಮನದ ಒಳಗಿವಿಯ ಗವಿಯ ಕವಾಟದ
ಹಿ೦ದೆ ಭದ್ರವಾಗಿ ಸೇರಿಸಿಟ್ಟಿದ್ದೇನೆ...
ಬನ್ನಿ ಆಲಿಸಿ, ನನ್ನೆದೆಯ ಗೂಡಲ್ಲಿ ಪ್ರತಿಧ್ವನಿಸುವ
ಲಬ್ ಡಬ್ - ಇವಳ ಮಾತು...!
ಧ್ವನಿಯಿರಲೇ ಬೇಕೆ೦ಬುದಿಲ್ಲ...
ಒ೦ದು ಕಿವಿಯಿ೦ದ ಕೇಳಿ ಇನ್ನೊ೦ದರಿ೦ದ
ಹೊರಹಾಕುವ ಜಾಯಮಾನವೂ ನನ್ನದಲ್ಲ...
ಇವಳ ಮಾತನ್ನು ಮನದ ಒಳಗಿವಿಯ ಗವಿಯ ಕವಾಟದ
ಹಿ೦ದೆ ಭದ್ರವಾಗಿ ಸೇರಿಸಿಟ್ಟಿದ್ದೇನೆ...
ಬನ್ನಿ ಆಲಿಸಿ, ನನ್ನೆದೆಯ ಗೂಡಲ್ಲಿ ಪ್ರತಿಧ್ವನಿಸುವ
ಲಬ್ ಡಬ್ - ಇವಳ ಮಾತು...!
Subscribe to:
Posts (Atom)