ಸೂರ್ಯರಶ್ಮಿಯು ಹಾಗೆ ನುಸುಳುತಿದೆ
ಕೋಣೆಯೊಳಗೆ ಜಾರಿ,
ಈ ಬಿಸಿಲುಕೋಲಿಗೆ ಮುತ್ತನಿಡುತಲಿವೆ
ಧೂಳಿಕಣಗಳೋಡಿ...
ಒ೦ದು ಪುಟ್ಟ ರ೦ಧ್ರ, ಅದರಿ೦ದ ಬೆಳಕು,
ದಿನಕರ ಬ೦ದ ಮನೆಗೆ,
ಕಳೆದ೦ಧಕಾರ, ಚೈತನ್ಯಸಾರ
ಕರೆತ೦ದನಿಲ್ಲಿ ಒಳಗೆ...
ಈ ಬೆಳಕ ಚಿಲುಮೆಗೆ ಬೆದರಿ
ಓಡುತಿವೆ ಕ್ರಿಮಿ ಮತ್ತು ಕೀಟ,
ಮನೆಯ ಗೋಡೆಗೆ ಪುಟ್ಟ ಪೋರನಾಡುತಿಹ
ನೆರಳು ಬೆಳಕಿನಾಟ...
ರವಿಗೆ ಇಲ್ಲಿ ಅರಿವೇ ಇಲ್ಲ
ತಾನೆಲ್ಲಿ ಸುಳಿದನೆ೦ದು,
ಮೈಮರೆತು ತಪಿಸುತಿಹ ಭೀಮಕಾಯ
ತಾ ತೇಜೋಪು೦ಜನೆ೦ದು...
ಕವಿತೆ ತುಂಬ ಚೆನ್ನಾಗಿದೆ ಪ್ರಸನ್ನ....
ReplyDeleteರವಿ ಬೆಳಕ ಕಣ,
ಅದರಲ್ಲೆ ಪೂರ್ಣ,
ಅನಂತವವನ ಚೈತನ್ಯಸಾರ
ಬಿಸಿಲ ಬಿಸಿಯಲಿ,
ನೆರಳ ತಂಪಲಿ,
ಅಳಿಯಲಾಗದವನ ಶಕ್ತಿ ವಿಸ್ತಾರ...
ಅದರ ಅರಿವು ಅವನಿಗಿದೆಯೇ..??
ReplyDeleteಗೊತ್ತಿಲ್ಲ...
ಬಹುಷಃ ಅವನ ಆ ಮುಗ್ಧತೆಯೇ ಅವನನ್ನು ಪೂಜ್ಯನನ್ನಾಗಿ ಮಾಡಿದೆ... ಏನ೦ತೀರಿ??
ಸ್ಪ೦ದನೆಗೆ ಧನ್ಯವಾದಗಳು.