ಆವತ್ತು,
ಅವಳು ತನ್ನ
ಇನಿಯನಿಗೆ ಮುನಿದು,
ಮೊಗ ಬೇರೆಡೆ ಹೊರಳಿಸಿ,
ತನ್ನ ದಾರಿ ಬದಲಿಸಿದ್ದಳು...
ಅವರಿಬ್ಬರ ನಡುವಿನ
ಕೋಪಕ್ಕೆ,
ಮರಗಳು ಕಣ್ಣೀರಿನ೦ತೆ ಎಲೆಗಳ
ಉದುರಿಸಿ ದುಃಖಿಸಿತ್ತು...
ಮೂಢಿಗಾಳಿ
ಆ ತರಗಲೆಗಳ ಚಲ್ಲಾಪಿಲ್ಲಿಯಾಗಿಸಿ
ಹತಾಶೆಯಾಗಿತ್ತು...
ನೆಲವೂ ಕಳೆಗು೦ದಿ,
ಕೋಪದ ಚಳಿಗೆ ನಡುಗಿ,
ಸುಕ್ಕುಗೊ೦ಡಿತ್ತು...
ಜನರ ಮೈಯೆಲ್ಲ ಒಡೆದು,
ತುಟಿ ಸೀಳಿ,
ಕೆ೦ಪು ನೆತ್ತರು ಹೆಪ್ಪುಗಟ್ಟಿ,
ಕಪ್ಪಾಗಿತ್ತು...
ರಾತ್ರಿ ಕತ್ತಲೆಯ ಗಾಢ
ಹೆಚ್ಚಾಗಿ, ಮತ್ತಷ್ಟು
ಕ್ರೂರಿಯಾಗಿತ್ತು...
ಆದರೆ,
ಎಷ್ಟು ಹೊತ್ತು ಅ೦ತ
ಈ ವಿರಹ ಹೀಗೇ ಇರಲು ಸಾಧ್ಯ...?
ಈಗ,
ಮಗ್ಗಲು ಬದಲಿಸಿದ್ದಾಳೆ ಭೂಮಿ ತನ್ನ ನಲ್ಲನೆಡೆಗೆ...
ಒಲವ ಸ್ವಾಗತ ಕೋರಿದ್ದಾನೆ ಇನಿಯ ರವಿ ಅವಳಿಗೆ...
ಪುಳಕಗೊಳಿಸಿದೆ ವಿಶ್ವವನ್ನು, ಅವರ ಬೆಚ್ಚನೆಯ ಪ್ರೀತಿ...
ಮೂಡಿ ಬ೦ದಿದೆ ಮತ್ತೆ ಸ೦ಭ್ರಮದ ಸ೦ಕ್ರಾ೦ತಿ....!!
*****************************************
ಎಲ್ಲರಿಗೂ ಮಕರ ಸ೦ಕ್ರಾ೦ತಿಯ ಹಾರ್ದಿಕ ಶುಭಾಶಯಗಳು...
ಅವಳು ತನ್ನ
ಇನಿಯನಿಗೆ ಮುನಿದು,
ಮೊಗ ಬೇರೆಡೆ ಹೊರಳಿಸಿ,
ತನ್ನ ದಾರಿ ಬದಲಿಸಿದ್ದಳು...
ಅವರಿಬ್ಬರ ನಡುವಿನ
ಕೋಪಕ್ಕೆ,
ಮರಗಳು ಕಣ್ಣೀರಿನ೦ತೆ ಎಲೆಗಳ
ಉದುರಿಸಿ ದುಃಖಿಸಿತ್ತು...
ಮೂಢಿಗಾಳಿ
ಆ ತರಗಲೆಗಳ ಚಲ್ಲಾಪಿಲ್ಲಿಯಾಗಿಸಿ
ಹತಾಶೆಯಾಗಿತ್ತು...
ನೆಲವೂ ಕಳೆಗು೦ದಿ,
ಕೋಪದ ಚಳಿಗೆ ನಡುಗಿ,
ಸುಕ್ಕುಗೊ೦ಡಿತ್ತು...
ಜನರ ಮೈಯೆಲ್ಲ ಒಡೆದು,
ತುಟಿ ಸೀಳಿ,
ಕೆ೦ಪು ನೆತ್ತರು ಹೆಪ್ಪುಗಟ್ಟಿ,
ಕಪ್ಪಾಗಿತ್ತು...
ರಾತ್ರಿ ಕತ್ತಲೆಯ ಗಾಢ
ಹೆಚ್ಚಾಗಿ, ಮತ್ತಷ್ಟು
ಕ್ರೂರಿಯಾಗಿತ್ತು...
ಆದರೆ,
ಎಷ್ಟು ಹೊತ್ತು ಅ೦ತ
ಈ ವಿರಹ ಹೀಗೇ ಇರಲು ಸಾಧ್ಯ...?
ಈಗ,
ಮಗ್ಗಲು ಬದಲಿಸಿದ್ದಾಳೆ ಭೂಮಿ ತನ್ನ ನಲ್ಲನೆಡೆಗೆ...
ಒಲವ ಸ್ವಾಗತ ಕೋರಿದ್ದಾನೆ ಇನಿಯ ರವಿ ಅವಳಿಗೆ...
ಪುಳಕಗೊಳಿಸಿದೆ ವಿಶ್ವವನ್ನು, ಅವರ ಬೆಚ್ಚನೆಯ ಪ್ರೀತಿ...
ಮೂಡಿ ಬ೦ದಿದೆ ಮತ್ತೆ ಸ೦ಭ್ರಮದ ಸ೦ಕ್ರಾ೦ತಿ....!!
*****************************************
ಎಲ್ಲರಿಗೂ ಮಕರ ಸ೦ಕ್ರಾ೦ತಿಯ ಹಾರ್ದಿಕ ಶುಭಾಶಯಗಳು...
ಒಲವೂ ಇರಬೇಕು
ReplyDeleteಪ್ರೀತಿ ಅತಿಯಾಗದಿರಲು
ಕಹಿಯೂ ಇರಬೇಕು
ಕೋಪ-ಪ್ರೀತಿಗಳ
ಮಧ್ಯೆ ಸರಿಯಾಗಿ ನಡೆಯುವುದು ಬದುಕು.
ತಮಗೂ ಸಂಕ್ರಾಂತಿಯ ಶುಭಾಷಯಗಳು
ಹೌದು.. ಸಮರಸವೇ ಜೀವನ..
ReplyDeleteಸ್ಪ೦ದನೆಗೆ ಧನ್ಯವಾದಗಳು.. ಮತ್ತೆ ಮತ್ತೆ ಬರುತ್ತಿರಿ..